Monday, 30 September 2013

ಪ್ರಚಲಿತ ವಿದ್ಯಮಾನ--------

ಲಾಲೂ ಚಲೇ ಜೇಲ್--------


ರಾಂಚಿಯ ಬಿರ್ಸಾ ಮುಂಡಾ ಕಾರಾಗೃಹದ ಹೆಸರು ನಾನು ಇಂದೇ ಕೇಳಿದ್ದು. .
ಇಲ್ಲಿ ಇಂದು ಆಗಮನವಾಯಿತು-ರಾಂಚಿ ನ್ಯಾಯಾಲದಿಂದ "ಪ್ರಸಾದ್" ಪಡೆದ ಲಾಲೂ ಪ್ರಸಾದ್ ಯಾದವ್ ಅವರದು.
ಅವರು ಇಲ್ಲಿ ಅತಿಥಿಯಾಗಿ ಬಂದಿರುವರು !
ಅಕ್ಟೋಬರ್ ೩ ರಂದು ಗೊತ್ತಾಗುವದು-ಇಲ್ಲಿ ಗರಿಷ್ಟ ೭ ವರ್ಷದ ವರೆಗೆ ಉಳಿಯುವರಾ ಇಲ್ಲಾ ಕನಿಷ್ಠ ೪ ವರ್ಷ ಇರುವರಾ ಅಂತ.
ಏನೇ ಆಗಲಿ ಲಾಲೂ ಯಾದವ್ ರ ರಾಜಕೀಯ ಜೀವನದ ಕೊನೆಯ ಪ್ರಾರಂಭ ಆಯಿತು ಅಂತ ಹೇಳಬಹುದೇ? 
ಈ ನುರಿತ ನರಿ ಬುದ್ಧಿಯ ರಾಜಕಾರಣಿಯನ್ನು ಅಷ್ಟು ಸರಳವಾಗಿ ಸಾರ್ವಜನಿಕ ಜೀವನದಿಂದ ಅಳಿಸಿ ಹಾಕಲಾಗುವದಿಲ್ಲ ಅಂತ ಹೇಳುವವರೂ ಇದ್ದಾರೆ.
ಭವಿಷ್ಯ ಇವರಿಗಾಗಿ ತನ್ನ ಗರ್ಭದಲ್ಲಿ ಏನು ಕಾಯ್ದಿಟ್ಟುಕೊಂಡಿದೆಯೋ ಸಮಯವೇ ಹೇಳಬೇಕು.

ಯಥಾ ಪ್ರಕಾರ ದಿಗ್ವಿಜಯಸಿಂಗ್ ತಮ್ಮ REPUTATION ಗೆ ತಕ್ಕ ಹಾಗೆ ಹೊಸ ವಿವಾದ ಮೆರೆದಿದ್ದಾರೆ. ಲಾಲೂ ದೋಷಿ ಅಂದು ತೀರ್ಮಾನವಾಗಿದ್ದು ಒಂದು ಪಿತೂರಿ ಅಂತೆ! ಅಯ್ಯಾ ದಿಗ್ಗಿ ರಾಜಾ ಇಲ್ಲಿ ಯಾರು ಪಿತೂರಿ ಮಾಡಲು ಸಾಧ್ಯ-ಸಿಬಿಐ ಕಾಂಗ್ರೆಸ್ ಕೈಯಲ್ಲಿದೆ. ಸಿಬಿಐ ಪಿತೂರಿ ಅಂದ್ರೆ ಇದು ಕಾಂಗ್ರೆಸ್ ಪಿತೂರಿ ಅಂತಲೇ ಆಗುವದಿಲ್ಲವೇ? ಅಂತಹ ಪಿತೂರಿಯ ದುರ್ವಾಸನೆ ಸ್ವಲ್ಪ ಸ್ವಲ್ಪ ನಮಗೂ ಬರ್ತಾನೂ ಇದೆ. ಅದಕ್ಕೇ ಇರಬೇಕು ನಿಮ್ಮ ಪಕ್ಷದ ಉಪಾಧ್ಯಕ್ಷರು ನಿಮ್ಮದೇ ಸರಕಾರ ರಾಷ್ಟ್ರಪತಿಗಳಿಗೆ ಕಳಿಸಿದ ಅಧ್ಯಾದೆಶವನ್ನು ಸಾರ್ವಜನಿಕವಾಗಿ ಅತ್ಯಂತ ನಾಟಕೀಯವಾಗಿ ' ಹರಿದು ಹಾಕಿ ಎಸೆಯಿರಿ' ಅಂತ ಹೇಳಿದ್ದು, ಅಲ್ಲವೇ? ಆ ಅರ್ಡಿನನ್ಸ್ ಗೆ ರಾಷ್ಟ್ರಪತಿಯವರ ಅನ್ಕಿತವಾಗಿದ್ದರೆ-ಲಾಲೂಗೆ ಸಂರಕ್ಷಣೆ ಸಿಗಬಹುದಿತ್ತು. ಈ ಬೆಳೆವಣಿಗೆ ನೋಡಿದರೆ ಕಾಂಗ್ರೆಸ್ ಲಾಲೂನ್ನ ದೂರ ಮಾಡಿ ಬಿಹಾರದಲ್ಲಿ ಹೊಸ ಮಿತ್ರಪಕ್ಷ (ನಿತೀಶ್ ಕುಮಾರರ ) ಹುಡುಕುತ್ತಿರಬಹುದಾ ಅನಿಸುವದರಲ್ಲಿ ಸುಲ್ಲಿರಲಿಕ್ಕಿಲ್ಲ. 

ಇಂದಿನ ಘಟನೆಗಳ ಒಂದು ಸಂಕ್ಷಿಪ್ತ ಅವಲೋಕನ ಹೀಗಿದೆ-
೧೭ ವರ್ಷಗಳ ಹಿಂದೆ ಇವರ ವಿರುದ್ಧ ಸಿಬಿಐ ಕೇಸ್ ದಾಖಲು ಮಾಡಿದರು 
ಆರೋಪ - ಅದಕ್ಕೂ ಹಿಂದಿನ ೨ದಶಕಗಳಲ್ಲಿ ೯೫೦ ಕೋಟಿಗಟ್ಟಲೆ ಹಣ ಸರ್ಕಾರಿ ಟ್ರೆಜರಿಯಿಂದ ಮೋಸದಿಂದ ತೆಗೆದು ಭ್ರಷ್ಟಾಚಾರ ಮಾಡಿದ್ದು.
ಆರೋಪಿ- ಲಾಲೂ ಮಾತ್ರ ಅಲ್ಲ ಮಾಜಿ ಬಿಹಾರ್ ಮಂತ್ರಿ ಜೆ ಏನ್ ಮಿಶ್ರಾ ಅಲ್ಲದೆ, ಇತರ ರಾಜಕಾರಣಿಗಳು ಹಾಗೂ ಅಧಿಕಾರಿಗಳೂ ಶಾಮೀಲು. 
ಸಿಬಿಐ ಕೇಸ್ ಹಾಕಿದ್ದು, ಇಲ್ಲಿಯವರೆಗೆ ಚಾರಾ ಘೋಟಾಲಾ ಕೇಸ್ಗಳಲ್ಲಿ ೯೦%ಕ್ಕೂ ಹೆಚ್ಚು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲಾಗಿದೆಯೆಂದು ವರದಿ. worse times ahead for Laalu ?
ಇವತ್ತು ಲಾಲೂ ಜತೆ ಜೆಡಿ -U MP ಜಗದೀಶ್ ಶರ್ಮಾ, ೪ ರಾಜಕಾರಣಿಗಳು, ೧೨ ಬಾಬುಗಳು, ಹೀಗೆ ಒಟ್ಟು ೪೫ ಜನಗಳು ದೋಷಿಯೆಂದು ತೀರ್ಮಾನಿಸಲಾಗಿದೆ.
ಅಕ್ಟೋಬರ್ ೩ ರಂದು ಶಿಕ್ಷೆಯನ್ನು ಘೋಷಿಸಲಾಗುವದು.ಆದ್ರೆ ಲಾಲೂ ತಕ್ಷಣ ಜೇಲು ಪಾಲಾದರು ಹಾಗೂ ಅಲ್ಲಿಯ ಜೆಲರ್ ಹೇಳಿಕೆಯ ಪ್ರಕಾರ ಲಾಲೂಗೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿಲ್ಲವಂತೆ. ನಮಗೆ ಈ ಮಾತು ನಂಬದೆ ಬೇರೆ ವಿಧಿ ಇಲ್ಲ.
ಸಧ್ಯಕ್ಕೆ-ಲಾಲೂ ಸಂಸತ್ ಸದಸ್ಯತ್ವ ರದ್ದು,ಮುಂದೆ ಚುನಾವಣಾ ಸ್ಪರ್ದಿಸಲಾರರು. 

೧೭ ವರ್ಷಳು ಜಾಸ್ತಿಯಾಗಲಿಲ್ಲವೇ ಈ ತೀರ್ಮಾನ ಬರಲು ಅಂತ ಸಹಜ ಪ್ರಶ್ನೆ ಏಳುವದು-ಆದರೆ ಏನು ಮಾಡೋದು -ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಹೀಗೆ.ನಡುವೆ ರಾಜಕೀಯ ಹಸ್ತಕ್ಷೇಪ ಬೇರೆ. ಹಾಗೆಯೇ JUSTICE DELAYED IS JUSTICE DENIED ಅಂತಾರೆ . ಹಾಗೆಯೇ BETTER LATE THAN NEVER ಅಂತಲೂ ಹೇಳ್ತಾರೆ . ಏನು ಮಾಡೋದು ಈ ದೇಶದ ಜನತೆ ಏನೋ ಒಂದು ಅನ್ಕೊಂಡು ಸಮಾಧಾನ ಮಾಡಿಕೊಳ್ಳಲೇ ಬೇಕು ಅನ್ನುವ ವಿಷಮ ಪರಿಸ್ಥತಿ ದೇಶದಲ್ಲೀಗ.. 

ವಿಷಯದ ಬಗ್ಗೆ ಆಯಿತು ಇನ್ನು ವ್ಯಕ್ತಿಯ ಬಗ್ಗೆ ಸಂಕ್ಷಿಪ್ತ ಅವಲೋಕನ ಹೀಗಿದೆ-

ಲಾಲೂ ( ಜನ್ಮ ೧೧ ಜೂನ್ ೧೯೪೮)
ಪಟ್ನಾ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಆರಂಗೆಟ್ರಂ! 
ಜೇಪೀ ಹಿಂಬಾಲಕರಾಗಿ ೧೯೭೭ ರಲ್ಲಿ ೨೯ ನೆ ವಯಸ್ಸಿನಲ್ಲಿ ಲೋಕ ಸಭಾ ಸದಸ್ಯತ್ವ.
ರಾಷ್ಟ್ರೀಯ ಜನತಾ ದಳ ದ ರಾಷ್ಟ್ರೀಯ ಅದ್ಯಕ್ಷ.೧೯೯೦-೧೯೯೭ ರ ವರೆಗೆ ಬಿಹಾರದ ಮುಖ್ಯ ಮಂತ್ರಿ.
FODDER SCAM ನಲ್ಲಿ ಚಾರ್ಜ್ ಶೀಟ್ ಮಾಡಿದ್ದಕ್ಕೆ ೯೭ ರಲ್ಲಿ ಮುಖ್ಯ ಮಂತ್ರಿ ಪದವಿಯಿಂದ ರಾಜೀನಾಮೆ
ಆದರೆ ಪಕ್ಕಾ ವಂಶವಾದಿ ಈ ರಾಜಕಾರಣಿ ಮಾಡಿದ್ದೇನು ಗೊತ್ತಾ - ಅಧಿಕಾರ ತಮ್ಮ ಪತ್ನಿಗೆ ಹಸ್ತಾಂತರಿಸಿ - ರಿಮೋಟ್ ಕಂಟ್ರೋಲ್ ದಿಂದ ರಾಜ್ಯಭಾರ ಮಾಡಿದರು. ವಂಶವಾದ ಪಾಲಿಸುವ ಗಾಂಧೀ ಪರಿವಾರದ ಜತೆ ಅತ್ಯಂತ ಸೌಂಹಾರ್ದಯುತ ಸಂಬಂಧ ರಾಜಕೀಯವಾಗಿಯೂ ಬೆಳೆಸಿ ಕೊಂಡರು.Birds of same feather flock together !
ಇವರ ಟೀಕಾಕಾರರು-ವಿರೋಧಿಗಳು ಇವರ ಬಿಹಾರ್ರಾಜ್ಯಭಾರದ ದಿನಗಳನ್ನು-ಕಾನೂನಿಲ್ಲದ ಜಂಗಲ್ ರಾಜ್ಯ ಅಂತ ವರ್ಣಿಸುತ್ತಿದ್ದರು.
೨೦೦೪-೨೦೦೯ ರ ವರೆಗೆ UPA -೧ ಸರಕಾರದಲ್ಲಿ ರೇಲ್ವೆ ಮಂತ್ರಿಯಾಗಿದ್ದರು. ಈಗ ನಮ್ಮ ರಾಜ್ಯ ಸೇರಿ ಎಲ್ಲ ಕಡೆ ರೇಲ್ವೆ ಯಲ್ಲಿ ಬಿಹಾರಿಗಳು ತುಂಬಿದ್ದರೆ ಅದಕ್ಕೆ ಕಾರಣ ಇವರ ಆ ಅಧಿಕಾರ.
ಸಧ್ಯಕ್ಕೆ ೧೫ ನೆ ಲೋಕ ಸಭೆಯಲ್ಲಿ ಸದಸ್ಯರಿದ್ದು ಮಂತ್ರಿ ಪದವಿ ಇಲ್ಲ.
ಮಂಡಲೀಕರಣದ ಅಗ್ರಗಣ್ಯ ರೂವಾರಿ ಇವರು, ಸೆಕ್ಯುಲರ್ ಹಣೆಪಟ್ಟಿ ಇಟ್ಟುಕೊಂಡು ಸೂಡೋ-ಸೆಕ್ಯುಲರ್ ರಾಜಕಾರಣದಲ್ಲಿ ನಿಪುಣ. ಇವರ ವೋಟ್ ಬ್ಯಾಂಕ್ ಗೆ MY ಅಂತ ಚುಟಕಾಗಿ ಹೆಸರು-ಮುಸ್ಲಿಂ-ಯಾದವ್.
ನಿತೀಶ್ ಕುಮಾರ್ ಇವರನ್ನು ಇವರದೇ ಜಾತೀಯ-ರಾಜಕಾರಣದಲ್ಲಿ, ಬಿಜೆಪಿ ಸೇರಿ ಸೋಲಿಸಿ , ಈಗ ಬಿಹಾರದ ಮುಖ್ಯ ಮಂತ್ರಿ.ಈಗ ನಿತೀಶ್ ಬಿಜೆಪಿ ಕೈ ಬಿಟ್ಟಾಗಿದೆ ಕಾಂಗ್ರೆಸ್ ಕೈ ಹಿಡಿಯುವ ತಯಾರಿ. 
ಬಿಹಾರವನ್ನು ಪುನಃ ತಮ್ಮ ಕೈವಶ ಮಾಡಿಕೊಳ್ಳಬೇಕೆಂದು ಒಂದೇ ಸಮನೆ ತಿಣಕುತ್ತಿದ್ದರು ಲಾಲೂ-ಒಂದು ಸಮಯದ ವೈರಿ ಪಾಸ್ವಾನ್ ಜತೆ ಕೈ ಜೋಡಿಸಿ ಇನ್ನೂ ಸಫಲತೆಗಾಗಿ ಕಾಯುತ್ತಿರುವಾಗಲೇ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಒಂದು ಬಾಂಬ್ ಶೆಲ್ ತರಹಾನೇ ಇವರ ರಾಜಕೀಯ ಭವಿಷ್ಯಕ್ಕೆ.
ಜಾದೂಗಾರ ಲಾಲೂ ಪತ್ನಿಗೆ ಅಧಿಕಾರ ಕೊಡ್ತಾರೋ ಇಲ್ಲಾ ಮಗ ತೇಜಸ್ವಿಗೆ ಕೊಡ್ತಾರೋ ಕಾದು ನೋಡಬೇಕು.
ಅತ್ಯಂತ ಕುಶಲ-ತೀಕ್ಷ್ಣ (ನರಿ)ಬುದ್ಧಿ ಹೊಂದಿದ ಈ ರಾಜಕಾರಣಿ ಹೊರನೋಟಕ್ಕೆ ಹುಚ್ಚು ಗಮಾರನಂತೆ ಕಾಣುತ್ತ ತನ್ನ ಕಾರ್ಯ ಸಾಧಿಸುತ್ತ ಬಂದಾತ. ವಕ್ರ ಜೋಕ್ ಮಾಡೋದರಲ್ಲಿ ನಿಸ್ಸೀಮ.
ಇವರನ್ನೊಮ್ಮೆ ಯಾರೋ ಕೇಳಿದರಂತೆ -ಲಾಲೂಜಿ ದೇಶದ ಜನಸಂಖ್ಯಾ ಸ್ಫೋಟ ನೋಡಿಯೂ ನೀವು ಇಷ್ಟು ಮಕ್ಕಳನ್ನು ಹೆತ್ತಿದ್ದೇಕೆ? ಟಿಪಿಕಲ್ ಲಾಲೂ ಉತ್ತರ-"ನೋಡಿ ನಾನು ವಿರೋಧ ಪಕ್ಷದಲ್ಲಿದ್ದೆ. ಸರಕಾರದ ಎಲ್ಲ ನೀತಿಗಳನ್ನು ವಿರೋಧ ಮಾಡುತ್ತಿದ್ದೆ. ಕುಟುಂಬ ನಿಯೋಜನೆ ಕೂಡ ಒಂದು ಸರಕಾರೀ ನೀತಿ ಆಗಿದ್ದು -ಅದನ್ನೂ ವಿರೋಧಿಸುತ್ತ ನಾವು ಇಷ್ಟು ಮಕ್ಕಳನ್ನು ಪಡೆದೆವು"!
ಇಂಥ ಉತ್ತರ ಕೇಳಿ ನಗಬೇಕಾ ಅಳಬೇಕಾ ?

No comments:

Post a Comment