೧೯೬೨ ಭಾರತ ಚೀನಾ ಯುದ್ಧ -ನೆಹರು ಅವಿವೇಕ------
ನಿನ್ನೆ ಟೀವೀ ಯಲ್ಲಿ "ದಾಸ್ತಾನೆ ಜಂಗ್" ( ಯುದ್ಧದ ಕತೆಗಳು) ಅನ್ನೋ ಕಾರ್ಯಕ್ರಮ ಆಜ್ ತಕ್ ವಾಹಿನಿಯಲ್ಲಿ ಸ್ವಲ್ಪ ಸಮಯ ನೋಡಿದೆ.
ನಿನ್ನೆಯ ಕಥೆ ೧೯೬೨ ಭಾರತ ಚೀನಾ ಯುದ್ಧ
ಅದೇ ಪ್ರೇರಣೆ ಈ ಲೇಖನಕ್ಕೆ.
೧೯೬೨ ಭಾರತ ಚೀನಾ ಯುದ್ಧ - ಮುಂದಾಲೋಚನೆಯಿಲ್ಲದ, ಅಧಿಕಾರದ ಮದದಿಂದ ಮತ್ತರಾದ ನಮ್ಮ ರಾಜಕೀಯ ನಾಯಕರು - ಮುಖ್ಯತಹ ಪ್ರಧಾನಿ ನೆಹರು (ಹಾಗೂ ರಕ್ಷಾ ಮಂತ್ರಿ ಮೆನನ್) -ಮಾಡಿದ ಘೋರ ಹಾಗೂ ಅಕ್ಷ್ಯಮ್ಯ ದೇಶದ್ರೋಹಿ ಅಪರಾಧ.
ಯುದ್ಧಕ್ಕೆ ತಯಾರೀ ಇಲ್ಲ ಅಂತ ಆರ್ಮಿ ಹೇಳಿದರೂ ಕೂಡಾ ತಮ್ಮ ಅಹಂ ಸಲುವಾಗಿ ಏನೂ ಸರಿಯಾದ ಸಾಮಾನು ಸರಂಜಾಮು,ಶಸ್ತ್ರಾಸ್ತ್ರ, ಮದ್ದು ಗುಂಡು, ಟೆಂಟ್-ವುಲನ್ ಬಟ್ಟೆ, socks-gloves ಇತ್ಯಾದಿಗಳ ಸಜ್ಜಿಲ್ಲದೇ ಸೇನೆಯನ್ನು ಸಾವಿನ ದವಡೆಗಳಲ್ಲಿ ನೂಕಿದರು.
ಸೈನಿಕರಿರುವದೆ ಸಾಯಲು ಅಂತ ಈಗ ಒಬ್ಬ ಬಿಹಾರಿ ರಾಜಕಾರಣಿ ಹೇಳಿಕೆ ಕೊಟ್ಟಿದ್ದಾನೆ.
ಆದರೆ ೧೯೬೨ ರಲ್ಲಿ ಒಬ್ಬ ಅವಿವೇಕಿ ಕಾಶ್ಮೀರಿ ರಾಜಕಾರಣಿ ಅದನ್ನು ಆಗಲೇ ಮಾಡಿ ತೋರಿಸಿದ್ದ !
ನಿಮಗೆ ಗೊತ್ತಾ-ಈ ಯುದ್ಧದಲ್ಲಿ ನಮ್ಮ ಸೈನಿಕರ ಹತ್ರ ೧೯೧೩ ರ ಪ್ರಥಮ ವಿಶ್ವ ಯುದ್ಧದ ಸಮಯದ ರೈಫಲ್ ಇದ್ದವು !
ಚೀನಾ ಬಿಡಿ, ಆಗ ಪಾಕಿಸ್ತಾನದ ಹತ್ತಿರ ಕೂಡಾ ಆಟೋಮೆಟಿಕ್ ರೈಫಲ್ ಇದ್ದವು.
ಗಡಿ ಅಲ್ಲಿಯ ಮೈ ಕೊರೆಯುವ ಅತ್ಯಂತ ಚಳಿಯಲ್ಲಿ - ಹಿಮದಲ್ಲಿ ನಮ್ಮ ಸೈನಿಕರಿಗೆ ಕಾಟನ್ ಯುನಿಫಾರ್ಮ್ ಹಾಗೂ ಕ್ಯಾನವಾಸ್ ಶೂ ಮಾತ್ರ ಕೊಡಲಾಗಿತ್ತು. ಹಿಮ-ಚಳಿಯ ಪರಿಣಾಮದಿಂದಾಗಿ ಹೆಚ್ಚಿನ ಸಾವು-ನೋವುಗಳಾದವು.
ನಮ್ಮ ಹೆಚ್ಚಿನಂಶ ಸೈನಿಕರು ಸತ್ತಿದ್ದು ಚೀನೀ ಗುಂಡುಗಳಿಂದಲ್ಲ-ಹಿಮ-ಚಳಿಯ ಪರಿಣಾಮದಿಂದಾಗಿ !
ಯಾರು ಸಾಯಲಿಲ್ಲವೋ ಹೆಚ್ಚಿನವರಿಗೆ ಚಿಲ್ ಬ್ಲೆನ್ಸ್ / ಫ್ರಾಸ್ಟ್ ಬೈಟ್ ಗಳಾಗಿ ಹೆಚ್ಚೇನೂ ಮಾಡಲಾಗದ ಸ್ಥಿತಿಯಲ್ಲಿದ್ದರು.
ನೆಹರು ಅವರ ಅವಿವೇಕದ-ಪಕ್ಷಪಾತಿ ನೀತಿಯ ಅನೇಕ ಉದಾಹರಣೆಗಳಲ್ಲಿ -ಇಲ್ಲೊಂದು ನೋಡಿ-
ಯುದ್ಧದಲ್ಲಿ ಕಮಾಂಡರ್ ಆಗಿ ನೇಮಿಸೋದು-ಫೈಟಿಂಗ್ ಆರ್ಮ್ಸ್ ನ ಅಧಿಕಾರಿಗಳನ್ನು. ಆದರೆ ನೆಹರು ನೇಮಿಸಿದ್ದು ತಮ್ಮಂತೆ ಕಾಶ್ಮೀರಿಯಾಗಿದ್ದ ಜನರಲ್ ಕೌಲ್ ಅವರನ್ನು- ಜನರಲ್ ಕೌಲ್ ಫೈಟಿಂಗ್ ಆರ್ಮ್ಸ್ ನ ಅಧಿಕಾರಿ ಯಾಗಿರಲಿಲ್ಲ-ಅವರು ಸರ್ವೀಸ್ ಕೋರ್ ಅಧಿಕಾರಿಯಾಗಿದ್ದು-ಅವರ ಅನುಭವ ಯುದ್ಧ ತಂತ್ರಗಳಲ್ಲಿರಲಿಲ್ಲ.ನೆಹರು ಅವರ ಕೈಯಾರೆ ಆಯ್ಕೆಯಾದ ಈ ಜನರಲ್ ಕೌಲ್ ಯುದ್ಧದ ಹೆಚ್ಚಿನ ಸಮಯ ದಿಲ್ಲಿಯಲ್ಲಿ ಅದೂ ಆಸ್ಪತ್ರೆ ಯಲ್ಲಿ ಕಳೆದರು ! ಅವರು ೭ ನೆಯ ಬ್ರಿಗೆಡಿನ ಬ್ರಿಗೇಡಿಯರ್ ದಳವಿಗೆ ಹೇಳಿದ್ದು-ಇನ್ನು ಮೇಲೆ ಈ ಯುದ್ಧ ನಿನ್ನದು-ಏನು ಮಾಡ್ತೀಯ ಮಾಡು.
ಇಂಥ ಅವಿವೇಕಿ ನಾಯಕರು-ಅವರ ಆಯ್ಕೆ ಜನರಲ್ ಕಾರಣದಿಂದಾಗಿ ಶೌರ್ಯದಿಂದ ಹೋರಾಡಿದರೂ ಯುದ್ಧದಲ್ಲಿ ಅನಾವಶ್ಯಕವಾಗಿ ಸಾವಿರಾರು ಸೈನಿಕರು ಮಡಿದರು. ಅನೇಕರು ಚೀನೀಯರ ಸೆರೆಯಾಳಾಗಿ ಸಿಕ್ಕುಬಿದ್ದರು-ಅವರಲ್ಲಿ ಬ್ರಿಗೇಡಿಯರ್ ದಳವಿ ಕೂಡ ಒಬ್ಬರು. ವರ್ಷಗಳ ನಂತರ ಬಿಡುಗಡೆಯಾದ ಮೇಲೆ ಅವರು ಬರೆದ ಪುಸ್ತಕವೇ -ದಿ ಹಿಮಾಲಯನ್ ಬ್ಲಂಡರ್. ಇದ್ದಲ್ಲದೆ ಬಂದ ಎಲ್ಲ ಇತರ ಪುಸ್ತಕಗಳಲ್ಲಿ ನೆಹರು ನೀತಿಯನ್ನು ಆ ಯುದ್ಧದಲ್ಲಾದ ಮುಖಭಂಗಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಹಾಗೆ ನೋಡಿದರೆ ನೆಹರು ಅವರನ್ನು ಸಾವಿರಾರು ಸೈನಿಕರ ಅನವಶ್ಯಕ ಸಾವು-ನೊವುಗಳ ಕಾರಣೀಕರ್ತ ಅನ್ನೋ ಯುದ್ಧಾಪರಾಧಕ್ಕೆ ನ್ಯಾಯಾಲಯದಲ್ಲಿ ನಿಲ್ಲಿಸ ಬೇಕಿತ್ತು, ಶಿಕ್ಷೆ ಕೊಡಬೇಕಿತ್ತು.
ಆದರೆ ನಮ್ಮ ದೇಶದಲ್ಲಿ ಪದವಿ-ಕುಟುಂಬ ನೋಡಿ ಅವರ ಮೇಲೆ ಕ್ರಮ-ನೆಹರು ಕುಟುಂಬಕ್ಕೆ ಇದರಿಂದ ವಿನಾಯತಿ-ಹಾಗೆ ನೋಡಿದರೆ ಇಂದಿರಾ ಗಾಂಧಿಯನ್ನು ಎಮರ್ಜೆನ್ಸಿ ಹೇರಿದ್ದಕ್ಕೆ ಜೀವಾವಧಿ ಕಾರಾಗೃಹದಲ್ಲಿ ಇಡಬೇಕಿತ್ತು ಹಾಗೂ ಚುನಾವಣೆಗೆ ಅನರ್ಹ ಮಾಡಬೇಕಿತ್ತು.
ವಂಶವಾದದ ವ್ಯಾಧಿ ಆಗಿನಿಂದ ಶುರು ಆಗಿ ಈಗ ಅಸಹ್ಯ ಮಟ್ಟಕ್ಕೆ ಬಂದು ಮುಟ್ಟಿದೆ-ಇದಕ್ಕೆ ಒಂದೇ ಮಾರ್ಗ, ಉಪಾಯ -ಇವರನ್ನು ಮಟ್ಟ ಹಾಕಬೇಕು.
ನೆಹರುರ ಸಮಯದಿಂದ ಬಂದ ಇನ್ನೊಂದು ವ್ಯಾಧಿ -ಸೈನ್ಯವನ್ನು ಉಪೇಕ್ಷೆ ಮಾಡುವದು-ಅದು ಕೂಡ ಯಾವ ಗಂಭೀರ ಮಟ್ಟ ಮುಟ್ಟಿದೆ ಎಂದರೆ -ಕೇಳಬೇಕೆಂದರೆ ಪ್ರಧಾನಿ-ಅಂತೋನಿ ಇಬ್ಬರೂ ಬಾಯಿ ತೆಗೆಯೋಲ್ಲ - ತೆಗೆದರೆ ಸುಳ್ಳು ಹೇಳ್ತಾರೆ.
ಕೊನೆಯದಾಗಿ ವಾಸುಕಿ ಎಹ್ ಎ ಅವರ ಇಂದಿನ(೩೦-೯-೧೩) ಕನ್ನಡಪ್ರಭದ ಲ್ಲಿಯ ಅಂಕಣದಲ್ಲಿ ಬರೆದ ಲೇಖನದ ಕೆಲವು ಸಾಲುಗಳನ್ನು ಉಲ್ಲೇಖಿಸುವೆ-
'ನೆಹರು ಅವರ ಅವಿವೇಕದ ಫಲವಾಗಿ ಚೀನಾ ಕೈಯಲ್ಲಿ ನಾವು ಮುಖಭಂಗ ಅನುಭವಿಸಿದಾಗ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು - "ಸಾವರ್ಕರ್ ಅವರ ಸಲಹೆಯಂತೆ ಭಾರತವು ತನ್ನ ಸೈನ್ಯಪಡೆಯನ್ನು ಸಜ್ಜುಗೊಳಿಸಿದ್ದರೆ ಈ ಅವಮಾನ ಆಗುತ್ತಿರಲಿಲ್ಲ" ಎಂದಿದ್ದರು.'